5ನೇ ಪ್ರತಿಭಾ ಪುರಸ್ಕಾರ ಮತ್ತು ಶ್ರೀಯುತ. ಡಾ. ಪಿ.ಕೆ. ರಾಜಶೇಖರ್ ರವರೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ.

ರೋಟರಿ ವತಿಯಿಂದ ಪ್ರತಿಭಾ ಪುರಸ್ಕಾರ
ದಿನಾಂಕ:07-08-2018 ರ ಮಂಗಳವಾರದಂದು ರೋಟರಿ ಮೈಸೂರು ಉತ್ತರ ವತಿಯಿಂದ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಒಟ್ಟು 28 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಗೀತಾ C N ರವರು ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹ ಪ್ರಾಧ್ಯಾಪಕರಾದ ಶ್ರೀಯುತ ಪ್ರಸನ್ನ ಕುಮಾರ್ ರವರು ವಿದ್ಯಾರ್ಥಿಗಳಿಗೆ ಒತ್ತಡ ನಿವಾರಣೆಯ ಮಾರ್ಗೋಪಾಯಗಳನ್ನು ತಿಳಿಸುತ್ತಾ- ಒತ್ತಡವು ಕಂಟಕವಲ್ಲ, ಒತ್ತಡವಿದ್ದಾಗಲೇ ಹೊಸದೊಂದು ಮಾರ್ಗ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ಒತ್ತಡ ನಿವಾರಣೆಯ ಬದಲು ಒತ್ತಡದ ನಿರ್ವಹಣೆ ಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೈಹಿಕ ನಿರ್ವಹಣೆ, ಮಾನಸಿಕ ನಿರ್ವಹಣೆ, ವ್ಯಕ್ತಿತ್ವ ನಿರ್ವಹಣೆ ಹಾಗೂ ಸಮಯ ನಿರ್ವಹಣೆ ಯನ್ನು ಮಾಡಿಕೊಂಡಾಗ ಒತ್ತಡ ನಿರ್ವಹಣೆ ತಾನಾಗಿಯೇ ಆಗಿ, ಉತ್ತಮ ಕಲಿಕೆ ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಉತ್ತರ ದ ಅಧ್ಯಕ್ಷರೂ ಆದ ಶ್ರೀಯುತ M K ನಂಜಯ್ಯರವರು ಮಾತನಾಡುತ್ತಾ- ನಿಜವಾದ ಪ್ರತಿಭೆ ಅಡಗಿರೋದು ಸರ್ಕಾರಿ ಶಾಲೆಯ ಮಕ್ಕಳಲ್ಲಿಯೇ. ಹಾಗಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಂಬ ಕೀಳರಿಮೆಯನ್ನು ಮೊದಲು ಕಿತ್ತೆಸೆದು ಉತ್ತಮ ಕಲಿಕೆಯತ್ತ ಗಮನಹರಿಸಿ ಸದೃಢ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಿಮ್ಮದು ಎಂದು ವಿದ್ಯಾರ್ಥಿ ಗಳನ್ನು ಹುರಿದುಂಬಿಸಿದರು. ನಂತರ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ದ ಕೊನೆಯಲ್ಲಿ ದೈಹಿಕ ಶಿಕ್ಷಕರಾದ ಶ್ರೀಮತಿ ಚಂದ್ರಕಲಾ ರವರು ವಂದನಾರ್ಪಣೆ ಮಾಡಿದರು. ಹಾಗೂ ಕಾರ್ಯಕ್ರಮ ದ ನಿರೂಪಣೆಯನ್ನು ಕನ್ನಡ ಶಿಕ್ಷಕಿಯವರಾದ ಶ್ರೀಮತಿ ವಸಂತಕುಮಾರಿಯವರು ನಡೆಸಿಕೊಟ್ಟರು.
🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋
ರೋಟರಿ ಸೆಂಟ್ರಲ್ ವತಿಯಿಂದ ಪ್ರತಿಭಾ ಪುರಸ್ಕಾರ


🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿನ ಪ್ರತಿಭಾ ಪುರಸ್ಕಾರ.
ದಿನಾಂಕ 01-11-2017 ರಂದು ಗ್ರಾಮ ಪಂಚಾಯಿತಿ ಮನುಗನಹಳ್ಳಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ.
🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋
ಆಗಸ್ಟ್ 15, 2017 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಪ್ರತಿಭಾ ಪುರಸ್ಕಾರ.
ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀಯುತ ಜಗದೀಶ್ ವಕೀಲರು, ಶ್ರೀಯುತ ಸೋಮಣ್ಣ ಗ್ರಾಮ ಪಂಚಾಯಿತಿ ಸದಸ್ಯರು, ಮನುಗನಹಳ್ಳಿ, ಹಾಗೂ ಗೋವಿಂದರಾಜು ರವರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ಲಿಂಗರಾಜು ರವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5000 ರೂ. ಗಳ ಚೆಕ್ ಹಾಗೂ ಡಿಕ್ಷನರಿಗಳನ್ನು ವಿತರಿಸಿದರು.
🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋
ದಿನಾಂಕ:12-07-2017 ರಂದು ಹಿರಣ್ಮಯಿ ಪ್ರತಿಷ್ಠಾನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ಕುಲ ಪುರೋಹಿತರೆಂದೇ ಹೆಸರಾದ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಜನ್ಮ ದಿನಾಚರಣೆ ಅಂಗವಾಗಿ ಏಪ್ರಿಲ್ 2017ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ 14 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋🦋
ದಿನಾಂಕ: 11-08-2017 ರಂದು ರೋಟರಿ (ಉತ್ತರ ) ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.