"ನೌಕರರ ಡೇಟಾ ವ್ಯವಸ್ಥೆಗೆ ಸ್ವಾಗತ. ನೌಕರರ ಎಲ್ಲಾ ವಿಧದ ರಜೆ ಮಂಜೂರಾತಿ,ಕಾಲಮಿತಿ ವೇತನಬಡ್ತಿ, ಖಾಯಂ ಪೂರ್ವ ಸೇವಾವಧಿ ಘೋಷಣೆ, ವಾರ್ಷಿಕ ಕಾರ್ಯನಿರ್ವಹಣಾ ವರದಿ,ಎಲ್ಲಾ ವಿಧದ ನಿರಾಕ್ಷೇಪಣಾ ಪ್ರಮಾಣ ಪತ್ರ ಹಾಗೂ ಇನ್ನಿತರ ಸೇವೆಗಳು ಈಗ ಸುಲಭವಾಗಿ ಆನ್‌ಲೈನ್‌ ಮೂಲಕ ಲಭ್ಯ "

ಜ್ಯೋತಿ ಸಂಜೀವಿನಿ

 🔵ಜ್ಯೋತಿ ಸಂಜೀವಿನಿ ಕಾರ್ಡ್‌ ಗಾಗಿ ಅರ್ಜಿ


               ಜ್ಯೋತಿ ಸಂಜೀವಿನಿ ಯೋಜನೆ

ಕರ್ನಾಟಕ ರಾಜ್ಯ ಆರೋಗ್ಯ  ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗಾಗಿ ಉಚಿತ ಚಿಕಿತ್ಸೆಯನ್ನು ನೀಡಲು ಜ್ಯೋತಿ ಸಂಜೀವಿನಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯು ಒಳಗೊಳ್ಳುವ ಖಾಯಿಲೆಗಳ ವಿವರಗಳು

ಈ ಯೋಜನೆಯಡಿಯಲ್ಲಿ 7 ತರಹದ ಗಂಭೀರ ಖಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆ 7 ಗಂಭೀರ ಖಾಯಿಲೆಗಳೆಂದರೆ

  • ಹೃದ್ರೋಗ
  • ನರರೋಗ
  • ಕ್ಯಾನ್ಸರ್
  • ನವಜಾತ ಶಿಶು & ಚಿಕ್ಕ ಮಕ್ಕಳ ಚಿಕಿತ್ಸೆ
  • ಅಪಘಾತ( ಮರ ಅಥವಾ ಮನೆ ಮೇಲಿಂದ ಬಿದ್ದು ಮೂಳೆ ಮುರಿತಗೊಂಡಾಗ)
  • ಸುಟ್ಟ ಗಾಯ
  • ಮೂತ್ರ ಪಿಂಡದ ಸಮಸ್ಯೆ( ಮೂತ್ರ ಪಿಂಡದ ಕಲ್ಲಿನ ಶಸ್ತ್ರ ಚಿಕಿತ್ಸೆ)

ಈ 7 ಖಾಯಿಲೆಗಳಿಗೆ ರಾಜ್ಯದ  ಎಲ್ಲಾ ಜಿಲ್ಲಾ ಆಸ್ಪತ್ರೆಗಳು,ಮತ್ತು ಯೋಜನೆಗೆ ನೋಂದಾವಣೆಗೊಂಡ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ (ಖಾಸಗೀ ಆಸ್ಪತ್ರೆ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.

ಒಟ್ಟಾರೆಯಾಗಿ 7 ಖಾಯಿಲೆಗಳ 572ಕ್ಕೂ ಹೆಚ್ಚು ವಿವಿದ ಬಗೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.

ಅರ್ಹತೆ:- ೧)ರಾಜ್ಯ ಸರ್ಕಾರಿ ನೌಕರರಾಗಿರಬೇಕು ೨) ಹೆಚ್ ಆರ್ ಎಂ ಎಸ್ ನಲ್ಲಿ ನೌಕರರ ಹಾಗೂ ಅವರ ಕುಟುಂಬದ ಅವಲಂಬಿತರ ಆಧಾರ್ ಸಂಖ್ಯೆಯನ್ನು ನಮೂದಿಸಿರುವುದು ಕಡ್ಡಾಯ ೩) ನೌಕರರ ಕೆ ಜಿ ಐ ಡಿ ಸಂಖ್ಯೆ ಕಡ್ಡಾಯ

ಹೆಚ್ಚಿನ ಮಾಹಿತಿಗಾಗಿ:- 18004258330 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವುದು ಹಾಗೂ ಸಮೀಪದ ತಾಲ್ಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ಮಿತ್ರರನ್ನು ಭೇಟಿ ಮಾಡುವುದು

No comments:

Post a Comment